Header Ads Widget

Responsive Advertisement

ಬಿಜೆಪಿ ಸೇರಲು ಹೊಸೂರು ಸತೀಶ್ ಜೋಯಪ್ಪ ಚಿಂತನೆ


ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಭಾಗಮಂಡಲ ವ್ಯಾಪ್ತಿಯ ಪ್ರಮುಖ ರಾಜಕಾರಣಿ ಹೊಸೂರು ಸತೀಶ್ ಜೋಯಪ್ಪ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೆ ಚಿಂತನೆ ನಡೆಸಿದ್ದಾರೆ.

ಹಲವಾರು ವರ್ಷಗಳಿಂದ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ತಮಗೆ ಪಕ್ಷದಲ್ಲಿ ಸೂಕ್ತ ಮನ್ನಣೆ ದೊರಕದಿರುವ ಹಿನ್ನೆಲೆಯಲ್ಲಿ ಇದೀಗ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಅವರು ಹೇಳಿದ್ದಾರೆ.
ಏಪ್ರಿಲ್ 5 ರಂದು ಭಾಗಮಂಡಲದಲ್ಲಿ ಸಮಾವೇಶ ನಡೆಸುವ ಮೂಲಕ. ಭಾಗಮಂಡಲ, ಕರಿಕೆ,ಪೆರಾಜೆ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆ ಗೊಳ್ಳುವುದಾಗಿ ಸತೀಶ್ ಅವರು ತಿಳಿಸಿದ್ದಾರೆ.

‌ಭಾಗಮಂಡಲದ ಜೇನು ಸಹಕಾರ ಸಂಘ,ಕಾವೇರಿ ಕಾಲೇಜು, ವಿಎಸ್ ಎಸ್ ಎನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸತೀಶ್ ಜೋಯಪ್ಪ ಸೇವೆ ಸಲ್ಲಿಸುತ್ತಿದ್ದಾರೆ.

Search Coorg Media

Coorg's Largest Online Media Network