ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷರ ಹೇಳಿಕೆಗೆ ಅಖಿಲ ಕೊಡವ ಸಮಾಜ ಯೂತ್ ವಿಂಗ್ ತಿರುಗೇಟು
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣನವರ ಹೇಳಿಕೆಗೆ ತಿರುಗೇಟು ನೀಡುತ್ತಾ ಮಾನ್ಯ ಗೌರವಾನ್ವಿತ ಸೂರ್ತಲೆ ಸೋಮಣ್ಣನವರೇ ಎರಡು ತಲೆಯ ಹಾವಿನಂತೆ ಇಬ್ಬಗೆಯ ಹೇಳಿಕೆಯನ್ನು ನೀಡುತ್ತಿದ್ದೀರಲ್ಲ, ಅಂದು ತಮ್ಮದೇ ಸಮುದಾಯದ ಚೇತನ್ ಎಂಬುವವರು ಕೋವಿ ವಿಷಯದಲ್ಲಿ ಕೇಸು ಹಾಕಿದ್ದಾಗ ನಿಮ್ಮ ಹೋರಾಟ ಎಲ್ಲಿ ಹೋಗಿತ್ತು. ಕೊನೆಗೆ ಹಿನ್ನಡೆಯಾದಾಗ ಕಣ್ಣೊರೆಸಲು ಅವರ ವಿರುದ್ಧ ಖಂಡನಾ ನಿರ್ಣಯದ ಸಭೆ ನಡೆಸಿ ಕೊಡವ ಹಾಗೂ ಅರೆಭಾಷಿಕ ಗೌಡರು ಒಂದಾಗಿ ಹೋಗಬೇಕು, ಚೇತನ್ ಅವರದ್ದು ಅವರ ವೈಯಕ್ತಿಕ ವಿಷಯ, ಅವರ ಕೇಸಿನ ವಿಷಯಕ್ಕೆ ಒಕ್ಕೂಟ ಬೆಂಬಲವಿಲ್ಲ ಒಕ್ಕೂಟ ಅವರ ನಿರ್ಧಾರವನ್ನು ಖಂಡಿಸುತ್ತದೆ ಎಂದವರು ಇದೀಗ ಎರಡು ತಲೆಯ ಹಾವಿನಂತೆ ರಾಜಕೀಯ ಮಾತನಾಡುತಿದ್ದೀರಲ್ಲ, ನಿಮಗೆ ಎರಡು ನಾಲಿಗೆ ಇದೆಯಾ.? ಹಲವಾರು ಊರು, ಕೇರಿ ನಾಡುಗಳಲ್ಲಿ ಕೊಡವ ಹಾಗೂ ಅರೆಭಾಷಿಕ ಜನಾಂಗದ ನಡುವಿನ ಸಂಬಂಧ ಈಗಲೂ ಉತ್ತಮವಾಗಿಯೇ ಇದೆ, ಮುಂದೆಯೂ ಹಾಗೆಯೇ ಇರುತ್ತೆ. ಅವರವರ ಬಾಂಧವ್ಯಗಳನ್ನು ಒಡೆಯಲು ನಮ್ಮ ನಿಮ್ಮಂತಹ ಅಧ್ಯಕ್ಷರಿಂದ ಸಾದ್ಯವಿಲ್ಲ ಎನ್ನುವುದು ತಿಳಿದಿರಲಿ. ಹಾಗೇ ಕೋವಿ ವಿಷಯದಲ್ಲಿ ರಾಜಕೀಯವನ್ನು ಎಳೆದು ತಂದು ಅನೂನ್ಯವಾಗಿರುವ ಕೊಡವ ಹಾಗೂ ಕೊಡವ ಭಾಷಿಕರ ನಡುವೆ ಹುಳಿ ಹಿಂಡಲು ಪ್ರಯತ್ನಿಸುತ್ತಿರುವ ನಿಮ್ಮ ಆಟ ಯಾವತ್ತು ಫಲಕಾರಿಯಾಗದು. ಇಲ್ಲಿಯತನಕ ಕೊಡವ ಭಾಷಿಕರ ಏಳಿಗೆಗೆ ನೀವು ಮಾಡಿದಾದರೂ ಏನೂ.? ಇದೀಗ ಜನಾಂಗವನ್ನು ಎತ್ತಿಕಟ್ಟಲು ಇಲ್ಲದ ಹೇಳಿಕೆಗಳನ್ನು ನೀಡುವುದರಿಂದ ಕೊಡವ ಹಾಗೂ ಭಾಷಿಕರ ನಡುವಿನ ಬಾಂಧವ್ಯ ಒಡೆಯಲು ಆಗುವುದಿಲ್ಲ, ಕೊಡವ ಭಾಷಿಕರು ಯಾವತ್ತಿದ್ದರೂ ಕೊಡವ ಜನಾಂಗದ ಸಹೋದರರಂತೆ ಎನ್ನುವುದು ಮರೆಯಬೇಡಿ.
ಕೊಡವರಾಗಲಿ ಅಥವಾ ಕೊಡವ ಭಾಷಿಕ ಜನಾಂಗವಿರಲಿ ಕಳೆದ 60 ವರ್ಷಗಳಿಂದ ಯಾವುದೇ ರಾಜಕೀಯ ಮೀಸಲಾತಿ ಸ್ಥಾನಮಾನವಿಲ್ಲದೆ ಹಾಗೂ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಕೇವಲ ಸ್ವಾಮಿ ನಿಷ್ಠೆಯಿಂದ ಪಕ್ಷಕ್ಕೆ ಬೆಂಬಲ ಕೊಟ್ಟುಕೊಂಡು ಕೆಲಸ ಮಾಡಿಕೊಂಡು ಬಂದಿದ್ದಾರೆ. ಹಾಗೇ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಈ ಹಿಂದೆ ಮೀಸಲಾತಿ ತೆರವುಗೊಂಡು ಸಾಮಾನ್ಯ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಯಿತು. ಆ ಸಮಯದಲ್ಲಿ ಕೂಡ ಕೊಡವರಲ್ಲಿ ಶಾಸಕರಾಗುವ ಆರ್ಹತೆ ಇರುವವರು ಅನೇಕರಿದ್ದರೂ ಕಳೆದ 20 ವರ್ಷಗಳಿಂದ ಸುದೀರ್ಘವಾಗಿ ತಮ್ಮದೇ ಜನಾಂಗದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ನಮ್ಮ ಜನಾಂಗದ ಪ್ರತಿನಿಧಿ ಇದ್ದರೂ ಕೂಡ ಅವರನ್ನು ಸೋಲಿಸಿದವರು ಇದೇ ಕೊಡವರು ಎನ್ನುವುದನ್ನು ಮರೆಯಬಾರದು. ಹೀಗಿರುವಾಗ ಕೊಡವರಿಗೆ ಜಾತಿ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ನೀವು ಇದೀಗ ತಾನೇ ಆಯ್ಕೆಯಾದ "ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ" ಗೆಲುವಿನ ಅಂತರವನ್ನು ತೆಗೆದು ನೋಡಿ. ಆತ ಯಾರಿಂದ ಗೆದ್ದಿದ್ದಾರೆ ಹಾಗೂ ಅಡ್ಡ ಮತದಾನ ಎಲ್ಲಾಗಿದೆ ಎಂದು ಗೊತ್ತಾಗುತ್ತದೆ. ನಿಮ್ಮ ಈಗಿನ ಹೇಳಿಕೆಯನ್ನು ಗಮನಿಸಿದ್ದಾಗ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಎಲ್ಲಿ ಆಗಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆಯಲ್ಲವೇ.? ಒಂದು ತಿಳಿದಿರಲಿ ಈ ದೇಶಕ್ಕೆ ಇಬ್ಬರು ವೀರ ಕಲಿಗಳು ಸೇರಿದಂತೆ ಮೊದಲ ಮಹಾದಂಡನಾಯಕನನ್ನು ಹಾಗೂ ಕಲ್ಪನೆಗೆ ನಿಲುಕದಷ್ಟು ವೀರ ಯೋಧರನ್ನು ಕೊಡುಗೆಯಾಗಿ ನೀಡಿದ ಕೊಡವರ ಜನಸಂಖ್ಯೆ ರಾಜ್ಯದಲ್ಲಿ ಕಡಿಮೆ ಇರಬಹುದು ಹಾಗೇ ಕೊಡಗಿನಲ್ಲಿ ಎರಡು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಕಷ್ಟಸಾಧ್ಯ ಎನ್ನುವುದು ನಿಮ್ಮ ಆಲೋಚನೆಯಲ್ಲಿರಬಹುದು. ಆದರೆ ಒಬ್ಬ ಅಭ್ಯರ್ಥಿಯನ್ನು ಸೋಲಿಸುವ ತಾಕತ್ತು ಹಾಗೂ ಜನಸಂಖ್ಯೆ ಮತ್ತು ಜನಬೆಂಬಲ ಕೊಡವರಿಗೆ ಇದೆ ಎನ್ನುವುದನ್ನು ಮರೆಯಬೇಡಿ. ಈ ಹಿಂದೆ ರಾಜರ ಕಾಲದಲ್ಲಿ ಕೂಡ ಕೊಡವರು ಜಾತಿ ರಾಜಕೀಯ ಮಾಡಿದವರಲ್ಲ. ಒಬ್ಬ ಜಂಗಮನನ್ನು ಪದವಿಯಲ್ಲಿ ಕೂರಿಸಿ ರಾಜ್ಯಭಾರ ಮಾಡಿಸಿದವರು ಇದೇ ಕೊಡವರು ಎನ್ನುವುದು ತಿಳಿದಿರಲಿ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network