Header Ads Widget

Responsive Advertisement

ಅಖಿಲ ಕೊಡವ ಸಮಾಜದ ಯುವಘಟಕ ಆಸ್ಥಿತ್ವಕ್ಕೆ; ನೂತನ ಅಧ್ಯಕ್ಷರಾಗಿ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವಿರೋಧ ಆಯ್ಕೆ


ನೂತನವಾಗಿ ಆಸ್ಥಿತ್ವಕ್ಕೆ ಬಂದಿರುವ ಅಖಿಲ ಕೊಡವ ಸಮಾಜದ ಯುವ ಘಟಕ ಅಧ್ಯಕ್ಷರಾಗಿ ಚಮ್ಮಟೀರ ಪ್ರವೀಣ್ ಉತ್ತಪ್ಪ ಆಯ್ಕೆಯಾಗಿದ್ದಾರೆ. ವಿರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಅಖಿಲ ಕೊಡವ ಸಮಾಜ ಸರ್ವ ಸದಸ್ಯರ ಸಭೆಯಲ್ಲಿ ಚಮ್ಮಟೀರ ಪ್ರವೀಣ್ ಉತ್ತಪ್ಪನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಸಭೆಗೆ ಮಾಹಿತಿ ನೀಡಿದ್ದರು. ಸಭೆಯಲ್ಲಿ ಮಾತನಾಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಯುವ ಜನಾಂಗವನ್ನು ಕೊಡವಾಮೆಯಡಿಯಲ್ಲಿ ತಯಾರು ಮಾಡುವ ಜವಬ್ದಾರಿಯನ್ನು ಯುವ ಘಟಕಕ್ಕೆ ನೀಡಿದ್ದು, ಇದರಿಂದ ಕೊಡವ ಸಂಸ್ಕೃತಿಯತ್ತ ಕೊಡವ ಯುವ ಜನಾಂಗ ಆಕರ್ಷಣೆಗೊಳ್ಳಲಿದ್ದಾರೆ. ಯುವ ಜನಾಂಗ ಈ ದೇಶದ ಆಸ್ತಿಯಾಗಿದ್ದು ಇವರ ಕೈಯಲ್ಲಿ ಅಧಿಕಾರವನ್ನು ನೀಡಿದ್ದರೆ ಒಂದು ಬದಲಾವಣೆ ಗಾಳಿ ಬೀಸಲಿದೆ ಎಂಬ ಅಲೋಚನೆಯಲ್ಲಿ ಈ ಯುವ ಘಟಕಕ್ಕೆ ಕಳೆದ ಆರು ತಿಂಗಳ ಹಿಂದೆಯೇ ಚಾಲನೆ ನೀಡಬೇಕಾಗಿತ್ತು,  ಆದರೆ ಕೊರೋನ ಮಹಾಮಾರಿಯಿಂದ ಇಷ್ಟು ಸಮಯ ತಡವಾಯಿತು. ಇದೀಗ ಕೊರೋನದೊಂದಿಗೆ ನಾವು ಬದುಕು ಸಾಗಿಸಬೇಕಾಗಿದ್ದು ಅನಿವಾರ್ಯವಾಗಿದೆ ಎಂದರು. ಅಖಿಲ ಕೊಡವ ಸಮಾಜ ಯುವ ಘಟಕದ ವಿಷಯದಲ್ಲಿ ಅಖಿಲ ಕೊಡವ ಸಮಾಜ ಮೂಗು ತೂರಿಸುವುದಿಲ್ಲ, ಆದರೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ ಎನ್ನುತ್ತಾ ಕೊಡವ ಸಮುದಾಯದ ಯುವ ಜನಾಂಗದ ಒಳಿತಿಗೆ ಶ್ರಮಿಸಬೇಕಿದೆ ಎಂದರು.
 

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಖಿಲ ಕೊಡವ ಸಮಾಜ ಯುವ ಘಟಕದ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಜಿಲ್ಲೆಯಲ್ಲಿ ಎಲ್ಲಾ ಜಾತಿ ಹಾಗೂ ವಿವಿಧ ಧರ್ಮದ ಜನಾಂಗವಿದ್ದು ಅವರೊಂದಿಗೆ ಸಹಬಾಳ್ವೆ ನಡೆಸಲು ನಮ್ಮ ಯುವಜನಾಂಗಕ್ಕೆ ಕರೆ ನೀಡಲಾಗುತ್ತದೆ, ಎಲ್ಲಾ ಜನಾಂಗದವರೊಂದಿಗೆ ಆನ್ಯೋನ್ಯವಾಗಿ ಜೀವನ ನಡೆಸಲು ಸಂದೇಶ ನೀಡಲಾಗುತ್ತದೆ, ಅದರಲ್ಲೂ ಕೊಡವ ಭಾಷಿಕ ಜನಾಂಗವನ್ನು ಜೊತೆ ಜೊತೆಯಲ್ಲಿ ಕರೆದೊಯ್ಯುವ ಕೆಲಸ ಮಾಡಲಾಗುತ್ತದೆ. ಅವರೆಲ್ಲಾರು ನಮ್ಮವರೇ ಕೆಲವೇ ಕೆಲವು ಹುಳಿಹಿಂಡುವ ಜನರಿಂದ ಜನಾಂಗ ಜನಾಂಗದ ನಡುವೆ ಶಿತಲ ಸಮರ ಏರ್ಪಟ್ಟಿದೆ, ಒಡಕು ಕಾಣಿಸಿಕೊಂಡಿದೆ, ಮುಂದಿನ ದಿನಗಳಲ್ಲಿ ಇದನ್ನು ಸರಿ ಮಾಡುವ ಕೆಲಸ ಮಾಡಲಾಗುತ್ತದೆ. ಕೊಡಗು ಶಾಂತಿಯ ನಾಡು, ಹಾಗೇ ಕೊಡವರು ಎಲ್ಲರನ್ನೂ ಸಹೋದರರಂತೆ ಕಾಣುವ ಜನಾಂಗ. ಕೊಡಗಿನಲ್ಲಿ ಯಾವತ್ತಿಗೂ ಜಾತಿಯ ವಿಷಗಾಳಿ ಬೀಸಿರಲಿಲ್ಲ, ಆದರೆ ಇದೀಗ ಜಾತಿಯ ಸಂಘರ್ಷ ಏರ್ಪಟ್ಟಿದೆ. ಇದನ್ನು ಬೆಳೆಸಿಕೊಂಡು ಹೋಗಲು ಕೊಡವರಿಗಂತು ಇಷ್ಟವಿಲ್ಲ. ಆದರೆ ನಮ್ಮ ತಾಯಿಯ ಸೆರಗಿಗೆ ಕೈ ಹಾಕಿದರೆ ನೋಡಿಕೊಂಡು ಇರುವ ಜನಾಂಗ ಕೊಡವರಲ್ಲ ಎಂದು ಎಚ್ಚರಿಕೆ ನೀಡಿದ ಅವರು  ಎಲ್ಲಾ  ಜನಾಂಗದವರು ಒಂದೇ ವೇದಿಕೆಯಡಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ, ಅದು ಬಿಟ್ಟು ಕಾಲು ಕೆರೆದುಕೊಂಡು ಬಂದರೆ ಸುಮ್ಮನಿರಲು ಸಾದ್ಯವಿಲ್ಲ ಅಂತಹವರಿಗೆ ಯಾವಾಗ ಯಾವ ರೀತಿ ಉತ್ತರ ಕೊಡಬೇಕು ಎನ್ನುವುದು ನಮಗೂ ಗೊತ್ತಿದೆ ಎಂದರು. ನೂತನವಾಗಿ ಆಸ್ಥಿತ್ವಕ್ಕೆ ಬಂದಿರುವ ಅಖಿಲ ಕೊಡವ ಸಮಾಜ ಯುವ ಘಟಕದ ಉಪಾಧ್ಯಕ್ಷರಾಗಿ ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಪ್ರದಾನ ಕಾರ್ಯದರ್ಶಿಯಾಗಿ ಸಣ್ಣುವಂಡ ದರ್ಶನ್ ಕಾವೇರಪ್ಪ, ಸಹ ಕಾರ್ಯದರ್ಶಿಯಾಗಿ ಅಪ್ಪಂಡೇರಂಡ ದೇವಯ್ಯ ಹಾಗೂ ಖಜಾಂಚಿಯಾಗಿ ಚಿರಿಯಪಂಡ ವಿಶು ಕಾಳಪ್ಪ ಆಯ್ಕೆಯಾದರೆ ಸಲಹೆಗಾರರಾಗಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು ಇತರ ಸಲಹೆಗಾರರು ಹಾಗೂ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸಿ ಸದ್ಯದಲ್ಲಿ ಯುವ ಘಟಕಕ್ಕೆ ಸದಸ್ಯತ್ವ ಆಭಿಯಾನವನ್ನು ಹಮ್ಮಿಕೊಳ್ಳಲಾಗುತದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದರು.