Header Ads Widget

Responsive Advertisement

ಮಡಿಕೇರಿ ನಗರದ ರಸ್ತೆಗಳು ಹಾಗೂ ಶೌಚಾಲಯಗಳನು ಸರಿಪಡಿಸುವಂತೆ "ಹಿತರಕ್ಷಣಾ ವೇದಿಕೆ"ಯಿಂದ ನಗರಸಭಾ ಆಯುಕ್ತರಲ್ಲಿ ಮನವಿ ಸಲ್ಲಿಕೆ


ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ  ನಗರದ ಸಂಪಿಗೆ ಕಟ್ಟೆ ರಸ್ತೆಯಿಂದ ಕನ್ನಂಡ ಬಾಣೆ ರಸ್ತೆಯ ಮೂಲಕ ಹಾದು ಹೋಗುವ ರಸ್ತೆಯು ಗುಂಡಿಗಳಿಂದ ಕೂಡಿದ್ದು ಪಾದಚಾರಿಗಳು ಹಾಗೂ ವಾಹನ ಸಂಚರಿಸಲು ತೊಂದರೆ ಆಗುತ್ತಿರುವುದರ ಬಗ್ಗೆ ಮಡಿಕೇರಿ ನಗರಸಭಾ ಆಯುಕ್ತರಾದ ರಾಮದಾಸ್ ಅವರ ಗಮನಕ್ಕೆ ತರಲಾಯಿತು.

ಈ ರಸ್ತೆಯನ್ನು  ಆದಷ್ಟು ಬೇಗ ಮರು ಡಾಂಬರೀಕರಣ ಮಾಡಿ ಕೊಡುವಂತೆ ಮನವಿ ಮಾಡಲಾಯಿತು ಮಡಿಕೇರಿ ನಗರದ ಗೌಳಿ ಬೀದಿಯಲ್ಲಿ ದಾನಿಗಳು ನಗರಸಭೆಗೆ ನೀಡಿದಂತಹ ಆಟದ ಮೈದಾನವನ್ನು ಶುಚಿಗೊಳಿಸಿ ಹಾಗೂ ಅಲ್ಲಿ ಅಕ್ಕಪಕ್ಕದ ಕಟ್ಟಡ ಕಾಮಗಾರಿ ನಡೆಯುತ್ತಿರುವ ಕಟ್ಟಡಗಳ ಸಾಮಗ್ರಿಗಳನ್ನು ಮೈದಾನದಲ್ಲಿ ಹಾಕಿರುವುದರ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಯಿತು. 

ಈ ಸಾಮಗ್ರಿಗಳನ್ನು ತೆರವುಗೊಳಿಸಿ ಮಕ್ಕಳಿಗೆ ಆಟವಾಡಲು ಮೈದಾನವನ್ನು ಒದಗಿಸಿ ಕೊಡಬೇಕೆಂದು ಕೋರಲಾಯಿತು ಇದೇ ಮೈದಾನದಲ್ಲಿ ಸಾರ್ವಜನಿಕ  ಶೌಚಾಲಯವಿದ್ದು ಅವುಗಳ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು ಶೌಚಾಲಯಗಳು ಪುಂಡ ಪೋಕರಿಗಳ ತಾಣವಾಗಿದು  ಇವುಗಳನ್ನು ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡುವಂತೆ ಈ  ಮನವಿ ಸಂದರ್ಭದಲ್ಲಿ ಕೇಳಿಕೊಳ್ಳಲಾಯಿತು. 

ಹಾಗೂ ಮಡಿಕೇರಿ ನಗರದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಅವುಗಳ ಗುಣಮಟ್ಟಗಳನ್ನು ಕಾಯ್ದುಕೊಂಡು ಕಳಪೆ ಕಾಮಗಾರಿ ನಡೆಯದಂತೆ ಎಚ್ಚರವಹಿಸಿ ತಾವುಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕುದ್ದು ಪರಿಶೀಲನೆ ಮಾಡಿ ಕಳಪೆ ಕಾಮಗಾರಿ ನಡೆದ ಪಕ್ಷದಲ್ಲಿ ಅಂತಹ ಗುತ್ತಿಗೆದಾರರನ್ನು ಆ ಕೂಡಲೇ ಕಪ್ಪುಪಟ್ಟಿಗೆ ಸೇರಿಸಬೇಕೆಂದು ಹಿತರಕ್ಷಣಾ ವೇದಿಕೆ ವತಿಯಿಂದ ಆಗ್ರಹಿಸಲಾಯಿತು ಈ ಸಂದರ್ಭದಲ್ಲಿ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ರವಿ ಗೌಡ. ಮಿನಾಜ್  ಪ್ರವೀಣ್. ಸತೀಶ್ ಪೈ. ವಸಂತ ಭಟ್. ವಿನೋದ್. ರಮೇಶ್ ಹಾಗೂ ಇನ್ನೂ ಹಲವು ಸಮಿತಿಸದಸ್ಯರು ಹಾಜರಿದ್ದರು

Search Coorg Media