ವಿರಾಜಪೇಟೆ: ವಿರಾಜಪೇಟೆ ವಕೀಲರ ಸಂಘಕ್ಕೆ ಪದಾಧಿಕಾರಿಗಳನ್ನು ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದರು. ದಿನಾಂಕ 21.12.2020 ಚುನಾವಣಾ ಅಧಿಕಾರಿಯಾದ ವಕೀಲ ಎಂ.ಎಂ. ಪೂವಣ್ಣ ಅಧಿಕೃತವಾಗಿ ಘೋಷಿಸಿದರು. ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಐ. ಆರ್. ಪ್ರಮೋದ್, ಉಪಾಧ್ಯಕ್ಷರಾಗಿ ಬಾಚ ಟ್ಟೀರ ಸುಬ್ಬಯ್ಯ, ಕಾರ್ಯದರ್ಶಿಯಾಗಿ ಮಂಡೆಪಂಡ ದಿನೇಶ್, ಜಂಟಿ ಕಾರ್ಯದರ್ಶಿಯಾಗಿ ವಿ.ಎಸ್.ಪ್ರೀತಮ್, ಖಜಾಂಜಿಯಾಗಿ ವಿ.ಜಿ ರಾಕೇಶ್, ಸದಸ್ಯರಾಗಿ ಎನ್. ಎಸ್ ಪ್ರಶಾಂತ್, ಎ.ಆರ್ ರಂಜನ್, ಕೆ.ವಿ ಸುನೀಲ್, ನರೇಂದ್ರ ಕಾಮತ್, ಸಿ.ಕೆ ಪೊನ್ನಣ್ಣ ಹಾಗೂ ಕೆ.ಸಿ ಪ್ರದ್ಯುಮ್ನ ರವರುಗಳು 2021-22 ಸಾಲಿಗೆ ಕಾರ್ಯನಿರ್ವಹಿಸುವರು.