Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಂವೇದನ ದಿನದ ಅಂಗವಾಗಿ ಬೃಹತ್‌ ರಕ್ತದಾನ ಶಿಬಿರ , ಬನ್ನಿ ರಕ್ತದಾನ ಮಾಡೋಣ: ನವೀನ್ ಪೂಜಾರಿ ಬಿಜೆಪಿ ಯುವ ಮೋರ್ಚಾ ಮಡಿಕೇರಿ ನಗರ

ಹಿಡಿಮಣ್ಣಿಗೆ ತೊಟ್ಟು ರಕ್ತದ ಬೆಲೆಯೊಡ್ಡಿ

ತನ್ನ ತಾರುಣ್ಯವನ್ನು ತಾಯನೆಲಕ್ಕೆ ಅರ್ಪಿಸಿದವರ ಬಲಿದಾನದ ನೆನಪಿಗಾಗಿ 

ಬನ್ನಿ ರಕ್ತದಾನ ಮಾಡೋಣ .

ನೀವು ನೀಡುವ ರಕ್ತದ ಜೊತೆ ಸಮಾಜದಲ್ಲಿ ಮಗದಷ್ಟು ಜನರು  ರಕ್ತದಾನ ಮಾಡಲು ಪ್ರೇರೇಪಿಸೋಣ.


ಸ್ವಾತಂತ್ರ್ಯ ಕಾಲಘಟ್ಟದಲ್ಲಿ ಅವರಿಗಿದ್ದದ್ದು ಎರಡೇ ಆಯ್ಕೆ ಒಂದೋ ಪರಕೀಯರಿಗೆ ಎದೆಯೊಡ್ಡಿ ತಲೆಕೊಡಬೇಕಿತ್ತು .

ಅದಾಗದಿದ್ದರೆ ದಾಸ್ಯಕ್ಕೆ ಮಂಡಿಯೂರಿ ತಲೆತಗ್ಗಿಸಬೇಕಿತ್ತು .

ಆದರೀಗ ನಮ್ಮ ಬದುಕು ಅವರಂತಿಲ್ಲ 

 ಕೋಟಿ ಕೋಟಿ ಕ್ರಾಂತಿಕಾರಿಗಳ ಬಲಿದಾನದ ಅಂಗವಾಗಿ ನಾವಿಂದು ನಿಟ್ಟುಸಿರು ಬಿಡುತ್ತಿದ್ದೇವೆ 

ಇಂದು ನಾವ್ಯಾರು ಕತ್ತಿಹಿಡಿದು ಹೋರಾಡಬೇಕಿಲ್ಲ .

ಅವರೆಲ್ಲರ ಸಂಸ್ಮರಣೆಗಾಗಿ ,ಬಲಿದಾನದ ನೆನಪಿಗಾಗಿ , ಕಡೇಪಕ್ಷ ರಕ್ತದಾನ ಮಾಡೋಣ .

ನಾವು ನೀಡುವ ನೆತ್ತರು ಮತ್ತೊಬ್ಬರ ಉಸಿರನ್ನುಳಿಸುತ್ತದೆ ಎಂಬುವುದನ್ನು ಮರೆಯದಿರೋಣ.

ಬನ್ನಿ ರಕ್ತದಾನ ಮಾಡೋಣ.

ರಕ್ತದಾನ ಮಹಾದಾನ

ರಕ್ತದಾನ ಮಾಡಲು ಇಚ್ಚಿಸುವವರು ದಯವಿಟ್ಟು ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಾಗಿ ವಿನಂತಿ🙏                        ಮೊ:8105917190 


( ನವೀನ್ ಪೂಜಾರಿ ,
ಬಿಜೆಪಿ ಯುವ ಮೋರ್ಚಾ ,ಮಡಿಕೇರಿ ನಗರ )