Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಳೆಗಾಲ ಪ್ರವಾಹ ಪೂರ್ವ ಮುನ್ಬೆಚ್ಚರಿಕೆ ಕ್ರಮವಾಗಿ ಬೇತ್ರಿಗೆ ಜಿಲ್ಲಾಧಿಕಾರಿ ಭೇಟಿ

 ಮಳೆಗಾಲ ಪ್ರವಾಹ ಪೂರ್ವ ಮುನ್ಬೆಚ್ಚರಿಕೆ ಕ್ರಮವಾಗಿ ಬೇತ್ರಿಗೆ ಜಿಲ್ಲಾಧಿಕಾರಿ ಭೇಟಿ


ಬೇತ್ರಿ, ಮೇ.29; ಮಳೆಗಾಲ ಪ್ರವಾಹ ಪೂರ್ವ ಮುನ್ಬೆಚ್ಚರಿಕೆ ಕ್ರಮವಾಗಿ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರ  ಮತ್ತು ಅಧಿಕಾರಿ ವರ್ಗ ವರ್ಷಂಪ್ರತಿ ಪ್ರವಾಹಕ್ಕೆ ತುತ್ತಾಗುವ ಬೇತ್ರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

   ಅಲ್ಲಿನ ಮಸೀದಿ ರಸ್ತೆಯಲ್ಲಿ ಸಾಗಿ ಗ್ರಾಮಸ್ಥರನ್ನು ಭೇಟಿ ಮಾಡಿ ಮುನ್ನೆಚ್ಚರಿಕೆ ಹಾಗೂ ಅಗತ್ಯವಾಗಿ ಆಗಬೇಕಾದ ಕಾಮಗಾರಿ ಬಗ್ಗೆ ಚರ್ಚಿಸಿದರು.

   ಇದೇ ಸಂದರ್ಭ ಗ್ರಾಮಸ್ಥರು ಪ್ರವಾಹ ಸಂದರ್ಭ ಮುಳುಗಡೆಯಾಗುವ ಸಾರ್ವಜನಿಕ ರಸ್ತೆಯನ್ನು ಎತ್ತರಿಸಲು ಹಾಗೂ ಪ್ರವಾಹದ ನೀರು ಮನೆಗಳಿಗೆ ನುಗ್ಗದಂತೆ ಅಲ್ಲಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

    ಇದೇ ಸಂದರ್ಭ ಉಪ ವಿಭಾಗಾಧಿಕಾರಿಗಳು, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ, ಕಂದಾಯ ನಿರೀಕ್ಷಕರು ಇತ್ಯಾದಿ ಅಧಿಕಾರಿಗಳಿದ್ದರು.

ವರದಿ; ಮಮ್ಮದಾಲಿ, ಬೇತ್ರಿ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,