Header Ads Widget

Responsive Advertisement

ಕಾವೇರಿ ಜಲ‌ಮೂಲ ಸಂರಕ್ಷಣಾ ಹೋರಾಟ ವೇದಿಕೆ ಅಸ್ತಿತ್ವಕ್ಕೆ

ಕಾವೇರಿ ಜಲ‌ಮೂಲ ಸಂರಕ್ಷಣಾ ಹೋರಾಟ ವೇದಿಕೆ ಅಸ್ತಿತ್ವಕ್ಕೆ


ಕಾವೇರಿ ಜಲ ಮೂಲ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷರಾಗಿ ಪುಳಿಂಜನ ಟಿ.ಪೂವಯ್ಯ ಆಯ್ಕೆ.ಉಪಾಧ್ಯಕ್ಷೆಯಾಗಿ ಸಮಾಜ ಸೇವಕಿ ಪಡಿಕಲ್ ಕುಸುಮಾವತಿ,ಪ್ರಧಾನ ಕಾರ್ಯದರ್ಶಿ ಯಾಗಿ ನಾರಾಯಣ ಸ್ವಾಮಿ ನಾಯ್ಡು,ಖಜಾಂಚಿಯಾಗಿ tax officer ಸಲ್ಮಾ ಆಯ್ಕೆ.ಮತ್ತಷ್ಟು ಪದಾಧಿಕಾರಿಗಳ ಆಯ್ಕೆ‌ ಮುಂದಿನ ಸಭೆಯಲ್ಲಿ ಮಾಡಲಾಗುವದು.

ಗೋಣಿಕೊಪ್ಪಲಿನ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಕೈಕೇರಿಯ ಜಮ್ಮಡ ಮೋಹನ್, ಹೊಸೂರುವಿನ ತುಷಾರ್ ಕುಲಕರ್ಣಿ, ಪಂಚಮಿ, ಹೆಚ್.ಎನ್.ಮಂಜುಳಾ, ಬೆಂಗಳೂರು ವಿಜಿಲೆನ್ಸ್ ಸ್ಕ್ವಾಡ್ ನ ಬಾದುಮಂಡ ಉಮೇಶ್, ಪತ್ರಕರ್ತರಾದ ಜೆ.ಸೋಮಣ್ಣ, ಖಾಲಿದ್, ಹೆಚ್.ಕೆ.ಜಗದೀಶ್, ಶಕುಂತಲಾ, ಪ್ರೌಢಶಾಲಾ ವಿಜ್ಞಾನ ಶಿಕ್ಷಕ ಕ್ರಷ್ಣ ಚೈತನ್ಯ, ರಾಮಯ್ಯ, ರಾಜಕುಮಾರ್ ಮುಂತಾದವರು ಉಪಸ್ಥಿತರಿದ್ದರು. 

ಗೌರವ ಸಲಹೆಗಾರ ಟಿ.ಎಲ್.ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಹೊಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ,ಕೊಡಗು ಕ್ಲಾತ್ ಸೆಂಟರ್ ನ ಬೋಸ್ ಮತ್ತಿತರರು ನೂತನ ರಾಜಕೀಯ ರಹಿತ‌ ಸಂಘಟನೆಗೆ ಶುಭಾಶಯ ಕೋರಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,