Header Ads Widget

Responsive Advertisement

ಪೊನ್ನಂಪೇಟೆ ‌ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮಾಲೋಚನಾ ಸಭೆ; ಕೊಡಗಿನಲ್ಲಿ ಬಲಿಷ್ಠ ಸಂಘಟನೆ ನಮ್ಮ ಗುರಿ ಕೇಶವ ಕಾಮತ್

ಪೊನ್ನಂಪೇಟೆ ‌ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ಸಮಾಲೋಚನಾ ಸಭೆ; ಕೊಡಗಿನಲ್ಲಿ ಬಲಿಷ್ಠ ಸಂಘಟನೆ ನಮ್ಮ ಗುರಿ ಕೇಶವ ಕಾಮತ್


ಪೊನ್ನಂಪೇಟೆ: ಗೋಣಿಕೊಪ್ಪಲು ಕಾಮತ್  ನವಮಿ ಸಭಾಂಗಣದಲ್ಲಿ ಇಂದು ಜಿಲ್ಲಾ ನೂತನ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಘಟಕದ ಸಮಾಲೋಚನಾ ಸಭೆ ನಡೆಯಿತು. ಮಾಜಿ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷರಾದ ಟಿ.ಪಿ ರಮೇಶ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಪೊನ್ನಂಪೇಟೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಡಾ ಚಂದ್ರಶೇಖರ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.  

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆಯ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದನ್ನು ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದು ಮತ್ತು  

ಸಾರ್ವಜನಿಕ ಮತ್ತು ಸರಕಾರಿ ಆಸ್ತಿಯನ್ನು ಹಾಳುಗೆಡವಿದ್ದು ಇವೆಲ್ಲವೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಮಾಡಿರುವ ಕಾರಣ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಬೇಕೆಂದು  ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುವಂತೆ ಮತ್ತು ಇವರು ನಡೆಸಿರುವ

 ಕೃತ್ಯ ಅಕ್ಷಮ್ಯ ಅಪರಾಧವಾಗಿದೆ. ರಾಷ್ಟ್ರೀಯ ಒಕ್ಕೂಟದ ವ್ಯವಸ್ಥೆಯಲ್ಲಿ ಇದು ದೇಶದ ಏಕತೆಗೆ ಧಕ್ಕೆ ತರುವ ವಿಚಾರವಾಗಿದೆ.ಈ‌ ಘಟನೆಯನ್ನು ಕೊಡಗು ಜಿಲ್ಲಾ ಕಸಾಪ ತೀವ್ರವಾಗಿ ಖಂಡಿಸುತ್ತದೆ ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಕೋಳೆರ ದಯಾ ಚಂಗಪ್ಪ, ಬಾಲಕೃಷ್ಣ ರೈ, ನಾರಯಣ ಸ್ವಾಮಿ ನಾಯ್ಡು, ಬಿ.ಟಿ‌ ಶ್ರೀನಿವಾಸ್, ಡಾ|| ಜಿ ಸೋಮಣ್ಣ, ಶ್ರೀಧರ್ ನೆಲ್ಲಿತ್ತಾಯ ಮತ್ತಿತ್ತರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಪೊನ್ನಂಪೇಟೆ ತಾಲೂಕು ಘಟನಾ ರಚನೆ, ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತಿನ ಮುಂದಿನ ಕೆಲಸ ಕಾರ್ಯಗಳ ರೂಪುರೇಷೆ, ಪರಿಷತ್ತಿನ ಕಾರ್ಯವ್ಯಾಪ್ತಿಯ ವಿಸ್ತರಣೆ ಕುರಿತು ಈ ಸಂದರ್ಭ ಸಮಾಲೋಚಿಸಲಾಯಿತು. 

ಸಮಾಲೋಚನೆಯ ನಂತರ ಮಾತನಾಡಿದ ಕೇಶವ ಕಾಮತ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು. ಹಾಗೆಯೇ ಹೋಬಳಿ ಮಟ್ಟದ ಘಟಕಗಳನ್ನು ತಾಲೂಕು ಘಟಕಗಳ ಸ್ಥಾಪನೆಯ ನಂತರ ಮಾಡಲಾಗುವುದು, ಬೈಲಾದಲ್ಲಿ ಹೋಬಳಿ ಮಟ್ಟದ ಘಟಕ ಸ್ಥಾಪನೆಗೆ ಅವಕಾಶ ಇಲ್ಲ.  ಮುಂಬರು ಫೆಬ್ರವರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿ ಹೋಬಳಿ ಮಟ್ಟದ ಘಟಕಕ್ಕೆ ಅವಕಾಶ ನೀಡುವಂತೆ ಕೋರಿಕೊಳ್ಳಲಾಗುವುದು, ಬೈಲಾದಲ್ಲಿ ಇರುವಂತೆ ಕಾರ್ಯಚಟುವಟಿಕೆ ಮಾಡಲಾಗುತ್ತದೆ ಎಂದು ಈ ಸಂದರ್ಭ ಅವರು ಹೇಳಿದರು. 

ಈ ಸಂದರ್ಭ ಸಭೆಯಲ್ಲಿರುವ ಪ್ರಮುಖರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ಬರುವಂತೆ ಕೆಲಸ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ ಕೇಶವ್ ಕಾಮತ್ ಅವರು. ಮುಂಬರುವ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವುದಾಗಿ ಹೇಳಿದರು‌. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿಸ್ತರಣೆ ಹಾಗೂ ರಾಜ್ಯ ಅಧ್ಯಕ್ಷರಾದ ಜೋಷಿಯವರ ರಾಜ್ಯದಲ್ಲಿರುವ ಒಟ್ಟು ಮೂರೂವರೆ ಲಕ್ಷ ಸದಸ್ಯರ ಸಂಖ್ಯೆಯನ್ನು ಒಂದು ಕೋಟಿಗೆ ಏರಿಸುವಲ್ಲಿ ಜಿಲ್ಲೆಯಲ್ಲಿಯೂ ಬೃಹತ್ ಸದಸ್ಯತ್ವ ಅಭಿಯಾನ ಮಾಡಿ ಅವರ ಗುರಿ ಮುಟ್ಟಲು ಜಿಲ್ಲೆಯಿಂದ ಗಮನಾರ್ಹ ಸೇವೆಸಲ್ಲಿಸುವ ಕುರಿತು ಆಶಯ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವ ಮೂಲಕ ಕೊಡಗಿನಲ್ಲಿ ಬಲಿಷ್ಠ ಸಂಘಟನೆ ಕಟ್ಟುವ ಕೆಲಸವನ್ನು ನಾವೆಲ್ಲ ಮಾಡೋಣ ಎಂದರು.

ಕಾರ್ಯಕ್ರಮವನ್ನು ಶೀಲಾಬೋಪಣ್ಣ ನಿರೂಪಿಸಿ, ಜಗದೀಶ್ ಜೋಡುಬೆಟ್ಟಿ ವಂದಿಸಿದರು, ಮೊದಲಿಗೆ ಎಲ್ಲರನ್ನೂ ನಾರಯಣ ಸ್ವಾಮಿ ನಾಯ್ಡು ಸ್ವಾಗತಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,