Header Ads Widget

Responsive Advertisement

ಜನವರಿ 25ರಿಂದ 27ರವರಗೆ ಹರಿಹರ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಪುನರ್‌ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ


ಜನವರಿ 25ರಿಂದ 27ರವರಗೆ ಹರಿಹರ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಪುನರ್‌ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ

ಕೊಡಗಿನ  ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿರುವ ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯದ ಜೀರ್ಣೋದ್ದಾರ ಕಾರ್ಯವು ಅಂತಿಮ ಹಂತದಲ್ಲಿದ್ದು, ಜನವರಿ 25ರಿಂದ 27ರವರಗೆ ಹರಿಹರ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಪುನರ್‌ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ನಡೆಯಲಿದೆ.


ಸ್ವಸ್ತಿ ಶ್ರೀ ಶುಭಕೃತ್‌ ನಾಮ ಸಂವತ್ಸರದ ಉತ್ತರಾಯಣ ಮಾಘಶುದ್ಧ 2 ಮಕರಮಾಸ 12ಕ್ಕೆ ಸರಿಯಾದ ಶುಕ್ಲಪಕ್ಷ ಷಷ್ಠಿ ತಿಥಿ ತಾ|| 27-01-2023ನೇ ಶುಕ್ರವಾರ ಬೆಳ್ಳಿಗೆ 10-10 ಗಂಟೆಗೆ ನಡೆಯುವ ಮೀನ ಲಗ್ನದ ಶುಭಮುಹೂರ್ತದಲ್ಲಿ ನೂತನವಾಗಿ ನಿರ್ಮಿಸಿರುವ ಗುಡಿಯಲ್ಲಿ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಪುನರ್‌ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವನ್ನು ಹರಿಹರ ಶ್ರೀ ಸುಬ್ರಹ್ಮಣ್ಯ ದೇವರ ಅರ್ಚಕರಾದ ಶ್ರೀ ರಾಘವೇಂದ್ರ ವೈಲಾಯರ ನೇತೃತ್ವದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ದಿನೇಶ್‌ ಬನ್ನಿಂತಾಯರು(ಕಡಬ, ಪುತ್ತೂರು) ಇವರು ನೆರವೇರಿಸಲಿದ್ದಾರೆ.

ಕಾರ್ಯಕ್ರಮಗಳ ವಿವರ:

ದಿನಾಂಕ: 25-01-2023ರ ಬುಧವಾರ; ಸಂಜೆ 4-30 ಗಂಟೆಗೆ ಸ್ವಸ್ತಿ ಪುಣ್ಯಾಹವಾಚನ ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಹೋಮ, ವಾಸ್ತು ಪೂಜೆ, ರಕ್ಷೋಘ್ನ ಹೋಮ, ಬಿಂಬ ಶುದ್ಧಿ, ಬಿಂಬಾಧಿವಾಸ, ಶಯ್ಯಾಧಿವಾಸ, ಅಷ್ಟಾವಾದನ

ದಿನಾಂಕ: 26-01-2023ರ ಗುರುವಾರ; ಬೆಳ್ಳಿಗ್ಗೆ 6-00 ಗಂಟೆಗೆ ಸ್ವಸ್ತಿ ಪುಣ್ಯಾಹವಾಚನ, ಪ್ರಾಯಶ್ಚಿತ ಹೋಮಗಳು, 48 ತೆಂಗಿನಕಾಯಿಯ ಗಣಪತಿ ಹೋಮ.

ಬೆಳ್ಳಿಗ್ಗೆ 9-50 ರಿಂದ 10-33ರವರಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವಿಯ ಮತ್ತು ಪರಿವಾರ ದೇವರ ಪ್ರತಿಷ್ಠಾಪನೆ, ಸಾನ್ನಿಧ್ಯ ಕಲಶಾಭಿಷೇಕ, ಸರ್ಪಶಾಂತಿ, ಪ್ರಸನ್ನ ಪೂಜೆ ನಡೆಯಲಿದೆ. 

ಸಂಜೆ 4-00 ಗಂಟೆಗೆ ಸ್ವಸ್ತಿ ಶ್ರೀ ಪುಣ್ಯಾಹವಾಚನ, ಕಲಶಮಂಡಲ ಪ್ರತಿಷ್ಠಾಪನೆ, ಕಲಶಾಂಗ ಪ್ರಧಾನ ಹೋಮ, ಕಲಶ ಪ್ರಸನ್ನ ಪೂಜೆ.

ದಿನಾಂಕ: 27-01-2023ರ ಶುಕ್ರವಾರ; ಬೆಳ್ಳಿಗ್ಗೆ 6-00 ಗಂಟೆಗೆ ಸ್ವಸ್ತಿಶ್ರೀ ಪುಣ್ಯಾಹವಾಚನ, ದುರ್ಗಾಹವನ ಬೆಳ್ಳಿಗ್ಗೆ 10-10 ಗಂಟೆಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಬ್ರಾಹ್ಮಣ ಆರಾಧನೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ

ಪ್ರತಿದಿನವೂ ಅನ್ನಸಂತರ್ಪಣೆ ಇರುತ್ತದೆ.


ಹರಿಹರ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಪುನರ್‌ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಶ್ರೀ ವೀರೇಂದ್ರ ಹೆಗ್ಗಡೆ, ಕೊಡಗು-ಮೈಸೂರು ಲೋಕಸಭಾ ಸದಸ್ಯರಾದ ಶ್ರೀ ಪ್ರತಾಪ್‌ ಸಿಂಹ, ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಸುಜಾ ಕುಶಾಲಪ್ಪ, ವಿರಾಜಪೇಟೆ ವಿಧಾನಸಭಾ ಸದಸ್ಯರಾದ ಶ್ರೀ ಕೆ.ಜಿ. ಬೋಪ್ಪಯ್ಯ, ಅಧ್ಯಕ್ಷರು ಮತ್ತು ಸದಸ್ಯರು: ಕೊಡಗು ಜಿಲ್ಲಾ ಪಂಚಾಯಿತಿ, ಅಧ್ಯಕ್ಷರು ಮತ್ತು ಸದಸ್ಯರು: ವಿರಾಜಪೇಟೆ ತಾಲ್ಲೂಕು ಪಂಚಾಯಿತಿ, ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಟಿ.ಶೆಟ್ಟಿಗೇರಿ, ಅರ್ಚಕರು: ಶ್ರೀ ಚಿಕ್ಕದೇವಮ್ಮ ದೇವಸ್ಥಾನ, ಸರಗೂರು, ಎಚ್.ಟಿ.ಕೋಟೆ ತಾಲ್ಲೂಕು. ಅಧ್ಯಕ್ಷರು ಮತ್ತು ಸದಸ್ಯರು: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ, ಹರಿಹರ. ಅಧ್ಯಕ್ಷರು ಮತ್ತು ಸದಸ್ಯರು: ಶ್ರೀ ಭದ್ರಕಾಳಿ ದೇವಸ್ಥಾನ ಸಮಿತಿ, ತಾವಳಗೇರಿ. ಅಧ್ಯಕ್ಷರು ಮತ್ತು ಸದಸ್ಯರು: ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿ, ಬೆಳ್ಳೂರು.

ಸರ್ವರಿಗೂ ಆದರದ ಸ್ವಾಗತವನ್ನು ಬಯಸುತ್ತಿರುವವರು:

ಅಧ್ಯಕ್ಷರು: ಮುಕ್ಕಾಟಿರ .ಪಿ. ವೇಣು, (ನಿವೃತ್ತ ಫ್ರೌಡ ಶಾಲಾ ಮುಖ್ಯೋಪಾದ್ಯಾಯರು), ಕಾರ್ಯದರ್ಶಿ: ಪರಿವಾರ ಎಸ್.‌ ನಟೇಶ, ಸಹ ಕಾರ್ಯದರ್ಶಿ: ಮುಕ್ಕಾಟಿರ ಬಿ. ಪೂಮಣಿ, ಖಜಾಂಚಿ: ಮುಕ್ಕಾಟಿರ ಕೆ. ಕರುಂಬಯ್ಯ, ಅರ್ಚಕರು: ಲೋಕೇಶ್ ಪಿ.ವಿ. ಕುಟುಂಬಸ್ಥರು, ಗುರು ಹಿರಿಯರು, ಗ್ರಾಮಸ್ಥರು.