Header Ads Widget

Responsive Advertisement

ಚೆರಿಯಪರಂಬು ಗ್ರಾಮದ ರಸ್ತೆಯಲ್ಲಿ ಚೆರಂಡಿ ನಿರ್ಮಾಣ ಗ್ರಾಮಸ್ಥರ ವಿರೋಧ

ಚೆರಿಯಪರಂಬು ಗ್ರಾಮದ ರಸ್ತೆಯಲ್ಲಿ ಚರಂಡಿ ನಿರ್ಮಾಣ  ಗ್ರಾಮಸ್ಥರ ವಿರೋಧ

ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆರಿಯಪರಂಬು ಗ್ರಾಮದ ರಸ್ತೆಯನ್ನು ಹಗೆದು ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ಹೊರಹಾಕಿದರು.

ಕಳೆದ ಹಲವಾರು ವರ್ಷಗಳಿಂದ ಚೆರಿಯಪರಂಬು ಗ್ರಾಮಕ್ಕೆ  ಮೂಲಭೂತ ಸೌಕರ್ಯವನ್ನು ಒದಗಿಸಲು ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ದೂರಿದ ಗ್ರಾಮಸ್ಥರು,ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಗೆ ಪರ್ಯಾಯ ಚೆರಂಡಿ ವೈವಸ್ಥೆ ನಿರ್ಮಿಸದೆ ಪಟ್ಟಣದ ಮಾರುಕಟ್ಟೆ ಹಾಗೂ ಪದವಿ ಪೂರ್ವ ಕಾಲೇಜು ಕಡೆಯಿಂದ ಬರುವ ಕೆಸರು ಮಿಶ್ರಿತ ಮಳೆ ನೀರು  ನಮ್ಮ ಗ್ರಾಮಕ್ಕೆ ತೆರಳುವ ರಸ್ತೆಯಲ್ಲೇ ಹರಿಯುತ್ತಿದೆ.ಇದರಿಂದ ಬರುವ ಮಣ್ಣು ರಸ್ತೆಯಲ್ಲೇ ಶೇಖರಣೆಗೊಂಡು ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾದಚಾರಿಗಳು ಸಂಚರಿಸಲು ಭವಣೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದನ್ನು ಸರಿಪಡಿಸಲು ಕಳೆದ ಕೆಲವು ದಿನಗಳ ಹಿಂದೆ  ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ ಹಿನ್ನಲೆ ಇಂದು ಚೆರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ರಸ್ತೆಯನ್ನೆ ಹಗೆದು ಅವೈಜ್ಞಾನಿಕವಾಗಿ  ಚೆರಂಡಿ ನಿರ್ಮಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ ವಾರ್ಡ್ ಸದಸ್ಯರು ಮತ್ತು ಉಪಾಧ್ಯಕ್ಷರು ಗ್ರಾಮಸ್ಥರಿಗೆ ಉಡಾಫೆ ಉತ್ತರವನ್ನು ನೀಡಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಹಾಗೂ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.

ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಚೆರಂಡಿ ವ್ಯೆವಸ್ಥೆ ಕಲ್ಪಿಸದಿದ್ದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಗ್ರಾಮ ಪಂಚಾಯಿತಿ ಎದುರು  ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಗ್ರಾಮಸ್ಥರಾದ ಅಬ್ದುಲ್ ಕರೀಂ,ಸಿರಾಜ್, ಝುಬೈರ್,ಹನಿಫಾ,ಸಲಾಂ, ಮಿರ್ಶಾದ್, ಹಫೀಲ್, ಅಬೂಬಕ್ಕರ್, ಪೀರು ಸಾಹೇಬ್, ಅಝೀಝ್, ಅರಫಾತ್, ಮಹಮ್ಮದ್ ಮತ್ತಿತರರು ಹಾಜರಿದ್ದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ