ಪಾಲಿಬೆಟ್ಟ ಸಮೀಪದ ಮೂಕ ಎಸ್ಟೇಟ್ ನಲ್ಲಿ (ಟಾಟಾ ಕಾಫಿ) ಆನೆ ದಾಳಿಯಿಂದಾಗಿ ಕಳೆದ 16 ದಿನಗಳಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜು (47) ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿರುವ ಸುದ್ದಿಯನ್ನು ತಿಳಿದು ಮೈಸೂರು-ಕೊಡಗು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆ ಅಧಿಕಾರಿಗಳ ಹತ್ತಿರ ಮರಣೋತ್ತರ ಪರೀಕ್ಷೆ ಯಾವುದೇ ತಡ ಆಗದೆ ಆದಷ್ಟು ಬೇಗ ಮಾಡುವುದಕ್ಕೆ ಹೇಳಿ ಮರಣೋತ್ತರ ಪರೀಕ್ಷೆ ಮುಗಿಯುವವರೆಗೂ ಆಸ್ಪತ್ರೆಯಲ್ಲಿದ್ದು ನಂತರ ಕುಟುಂಬವರ್ಗದವರಿಗೆ ಸ್ವಾಂತನ ಹೇಳಿ ತೆರಳಿದರು*