Header Ads Widget

Responsive Advertisement

ಗೋಣಿಕೊಪ್ಪಲು ಕ್ರಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಆಚರಣೆ


ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರುಗಳ ವತಿಯಿಂದ ರೈತರ ದಿನಾಚರಣೆಯನ್ನು ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರದ ಉದ್ಘಾಟನೆಯನ್ನು ನಬಾರ್ಡ್ ಬ್ಯಾಂಕ್ ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಶ್ರೀ ಶ್ರೀನಿವಾಸ್ ರವರು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ವಿ.ಕೆ ಯ ಮುಖ್ಯಸ್ಥರಾದ ಡಾ.ಸಾಜು ಜಾರ್ಜ್ ರವರು ವಹಿಸಿದರು. 


ಈ ಕಾರ್ಯಕ್ರಮದಲ್ಲಿ ಅಣಬೆಯ ಕೃಷಿ ಯನ್ನು ಮುಖ್ಯ ಅದಾಯವಾಗಿಸಿಕೊಂಡು ಜಿಲ್ಲೆಗೆ ಮಾದರಿಯಾಗಿರುವ ಶ್ರೀಮತಿ ಅಶ್ರಫ್ ಉಣಿಸಾ ಮತ್ತು ನರ್ಸರಿಯನ್ನು ಉಪಕಸುಭಾಗಿಸಿಕೊಂಡಿರುವ ಕುಶಾಲನಗರ ಶ್ರೀ ಬಾಲಾಕೃಷ್ಣ ರವರುಗಳನ್ನು ಸನ್ಮಾನಿಸಲಾಯಿತು. ಕೇಂದ್ರದ ವಿಜ್ಞಾನಿ ಡಾ.ವೀರೇಂದ್ರ ಕುಮಾರ್ ರವರು ಸ್ವಾಗತಿದರು. ಪ್ರಭಾಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಗತಿಪರ ಕೃಷಿಕರಾದ ತಿಮ್ಮಯ್ಯ, ರೋಹಿಣಿ ಸುಬ್ಬಯ್ಯ ಮತ್ತು ದಿಲ್ ಕುಮಾರ್ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಅಣಬೆ ತರಬೇತಿಯನ್ನು ನೀಡಲಾಯಿತು. ಜಿಲ್ಲೆಯ ಸುಮಾರು 52 ರೈತರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.


Search Coorg Media: Coorg's Largest Online Media Network