Header Ads Widget

Responsive Advertisement

ಮಳೆಗಾಲ ಹಿನ್ನಲೆ ಮುಂಜಾಗೃತಾ ಕ್ರಮ; ನಗರಸಭೆ ಬಿಜೆಪಿ ಸದಸ್ಯರಿಂದ ಮಡಿಕೇರಿ ಪೌರಾಯುಕ್ತರ ಜೊತೆ ಚರ್ಚೆ

ಮಳೆಗಾಲ ಹಿನ್ನಲೆ ಮುಂಜಾಗೃತಾ ಕ್ರಮ; ನಗರಸಭೆ ಬಿಜೆಪಿ ಸದಸ್ಯರಿಂದ ಮಡಿಕೇರಿ ಪೌರಾಯುಕ್ತರ ಜೊತೆ ಚರ್ಚೆ.





ಮಡಿಕೇರಿ ನಗರಸಭೆಗೆ ನೂತನವಾಗಿ ಆಯ್ಕೆಯಾದ  ಭಾರತೀಯ  ಜನತಾ  ಪಕ್ಷದ ಸದಸ್ಯರು  ಇಂದು  ನಗರಸಭೆಯ   ಪೌರಯುಕ್ತರನ್ನು  ಭೇಟಿಯಾಗಿ    ಮಳೆಗಾಲ  ಪ್ರಾರಂಭಕ್ಕೆ  ಮುಂಚಿತವಾಗಿ  ನಗರದಲ್ಲಿ   ಆಗ  ಬೇಕಾದ ಅಗತ್ಯ   ಕೆಲಸದ  ಬಗ್ಗೆ   ವಿವರಿಸಿದರು .

ನಗರದ   ಎಲ್ಲಾ  ಕಡೆ  ಚರಂಡಿ ಶುಚಿಗೊಳಿಸಿ  ಕಾಡು  ಕಡೆಯುದು  ನೀರು  ಸರಾಗವಾಗಿ  ಹರಿಯಲು  ಕೋಲು  ಚರಂಡಿ  ವ್ಯವಸ್ಥೆ  ಮಾಡುವುದು ,

ಕಾವೇರಿ  ಲೇಔಟ್.  ಟಿ ಜಾನ್  ಲೇಔಟ್.  ಮುಳಿಯ  ಲೇಔಟ್  ಪ್ರಕೃತಿ  ಲೇಔಟ್‍ಗಳಲ್ಲಿ  ಮಳೆ ಗಾಲದಲ್ಲಿ  ಅನುಭವಿಸುವ  ತೊಂದರೆಗಳ  ಬಗ್ಗೆ  ಸೂಕ್ತವಾಗಿ  ಸ್ಪಂದಿಸಿದ್ದು ಚಾಮುಂಡೇಶ್ವ ನಗರ , ಇಂದಿರಾ ನಗರ , ಮಂಗಳ ದೇವಿ  ನಗರದ  ನಿವಾಸಿಗಳ ಕಷ್ಟಗಳಿಗೆ  ಸ್ಪಂದಿಸುವ  ಮೂಲಕ   ಇವರಿಗೆ  ಬದಲಿ  ವ್ಯವಸ್ಥೆ   ಮಾಡುವುದು  ನಗರದ  ಪ್ರತಿ  ವಾರ್ಡ್‍ಗಳಿಗೆ  ಮಳೆಗಳಾದ  ತಯಾರಿ ಬಗ್ಗೆ  ವಿಶೇಷ  ಗಮನ  ಹರಿಸುವುದು  , ನಗರಸಭೆಯಲ್ಲಿ  ಈ ಕೆಲಸಗಳಿಗೆ ಸಿಬ್ಬಂದಿ ಕೊರತೆ ಆಗದಂತೆ      ನೋಡಿಕೊಳ್ಳುದು  ಸೇರಿದಂತೆ  ನಗರದ  ಅನೇಕ  ಸಮಸ್ಯೆಗಳ  ಬಗ್ಗೆ  ಪೌರಯುಕ್ತರು  ಗಮನ  ಹರಿಸುವಂತೆ   ನಗರಸಭಾ  ಸದಸ್ಯರ  ನಿಯೋಗ  ಸೂಚಿಸಿದಾಗ  ನಾಳೆಯೇ  ಸಭೆ  ಕರೆಯುದಾಗಿ  ಭರವಸೆ  ನೀಡಿದ್ದಾರೆ.

ಈ ಸಂದರ್ಭದಲ್ಲಿ  ನಗರಸಭಾ  ಸದಸ್ಯರುಗಳಾದ  ಮಹೇಶ್ ಜೈನಿ ಕೆ.ಎಸ್. ರಮೇಶ್.  ಅರುಣ್ ಶೆಟ್ಟಿ  ಉಮೇಶ್ ಸುಬ್ರಮಣಿ  ಅಪ್ಪಣ್ಣ  ಎಸ್.ಸಿ.ಸತೀಶ್ ಹಾಜರಿದ್ದರು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network