Header Ads Widget

Responsive Advertisement

ಎಂ.ಟಿ.ಕಾರ್ಯಪ್ಪ ಮತ್ತು ಅವರ ಬೆಂಬಲಿಗರಿಂದ ಕದ್ದಣಿಯಂಡ ಹರೀಶ್ ಬೋಪಣ್ಣ ನವರನ್ನು ಭೇಟಿ; ರಾಜಕೀಯ ಬಗ್ಗೆ ಮಾತುಕತೆ


ಎಂ.ಟಿ.ಕಾರ್ಯಪ್ಪ   ಮತ್ತು ಅವರ  ಬೆಂಬಲಿಗರಿಂದ ಕದ್ದಣಿಯಂಡ  ಹರೀಶ್  ಬೋಪಣ್ಣ ನವರನ್ನು  ಭೇಟಿ; ರಾಜಕೀಯ  ಬಗ್ಗೆ ಮಾತುಕತೆ

ಕೊಡಗು  ಜೆಡಿಎಸ್ ಪಕ್ಷದ   ಕೆಲವು  ನಾಯಕರು  ಪಕ್ಷಕ್ಕೆ  ರಾಜೀನಾಮೆ  ನೀಡಿದ  ಹಿನ್ನಲೆಯಲ್ಲಿ ಇಂದು  ಎಂ.ಟಿ.ಕಾರ್ಯಪ್ಪ   ಮತ್ತು ಅವರ  ಬೆಂಬಲಿಗರು  ಮಡಿಕೇರಿ  ಭಾಗದ  ನಾಯಕರು   ಕಾಂಗ್ರೇಸ್ ಪಕ್ಷದ  ಪ್ರಭಾವಿ  ನಾಯಕ  ಕದ್ದಣಿಯಂಡ  ಹರೀಶ್  ಬೋಪಣ್ಣ ನವರನ್ನು  ಭೇಟಿ  ಮಾಡಿ  ರಾಜಕೀಯ  ಬಗ್ಗೆ ಮಾತುಕತೆ  ನಡೆಸಿದ್ದಾರೆ. 

ಈ ಸಮಯದಲ್ಲಿ  ಕಾರ್ಯಪ್ಪ  ಮತ್ತು ಬೆಂಬಲಿಗರು   ಬಿಜೆಪಿ ಪಕ್ಷ  ಸೇರುವ  ಬಗ್ಗೆ ಒಲವು  ತೋರಿಸಿದ್ದು, ಹರೀಶ್  ರವರು  ಕೊಡಾ  ಈ ಬಗ್ಗೆ ಸದ್ಯದಲ್ಲೇ   ತೀರ್ಮಾನ  ಕೈ ಗೊಳ್ಳುತ್ತಾರೆ ಎಂದು ಮಾಹಿತಿ ಇದೆ. 

ಕೊಡಗು  ಜೆಲ್ಲೆಯಲ್ಲಿ ಜೆಡಿಎಸ್ ಪಕ್ಷದ  ಹಿರಿಯ ಅನೇಕ  ನಾಯಕರು  ಪಕ್ಷ  ಬಿಡುತ್ತಿದ್ದು ಇವರ  ನಡೆ  ಯಾವ  ಪಕ್ಷದ  ಕಡೆ  ಎಂಬುವುದು ಕುತೂಹಲ ಕೆರಳಿಸಿದೆ.