Header Ads Widget

Responsive Advertisement

ಕೊಡಗು ಜೆಡಿಎಸ್ ನಲ್ಲಿ ರಾಜೀನಾಮೆ ಭೀತಿ; ಜೆಡಿಎಸ್‌ ತೊರೆದು ಬಿಜೆಪಿ ಕಡೆಗೆ ಒಲವು.!


ಕೊಡಗು ಜೆಡಿಎಸ್ ನಲ್ಲಿ ರಾಜೀನಾಮೆ ಭೀತಿ; ಜೆಡಿಎಸ್‌ ತೊರೆದು ಬಿಜೆಪಿ ಕಡೆಗೆ ಒಲವು.! 

ಕೊಡಗು  ಜೆಡಿಎಸ್ ಪಕ್ಷದ  ನಾಲ್ಕು ನಾಯಕರು  ನಿನ್ನೆ ಪಕ್ಷಕ್ಕೆ  ರಾಜೀನಾಮೆ  ನೀಡಿದ  ಹಿನ್ನಲೆ  ಅವರ ಗುಂಪಿನ  ವಿರಾಜಪೇಟೆ  ತಾಲ್ಲೂಕು ಯುವ  ಜೆಡಿಎಸ್ ಮಾಜೀ  ಅಧ್ಯಕ್ಷ  ಅಮ್ಮಂಡ  ವಿವೇಕ್ ಮತ್ತು  ಕದನೂರು  ಗ್ರಾಮ ಪಂಚಾಯತಿ  ನಾಯಕ  ವಿ.ದೀಪಕ್  ಜೆಡಿಎಸ್ ಪಕ್ಷ  ಬಿಟ್ಟು  ಬಿಜೆಪಿ ಸೇರಲಿದ್ದಾರೆ  ಎಂದು ಬಲ್ಲ ಮೂಲಗಳಿಂದ ಮಾಹಿತಿ ಹರಿದಾಡುತಿದೆ.

ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಯಾರು ಯಾವ ಪಕ್ಷದ ಬಾಗಿಲು ತಟ್ಟಲಿದ್ದಾರೆಯೋ ಎಂಬುದು ಸದ್ಯಕ್ಕೆ ಗೊತ್ತಾಗುತ್ತಿಲ್ಲವಾದರೂ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ.