Header Ads Widget

Responsive Advertisement

ನೇತಾಜಿ ಅವರ ಸವಿನೆನಪಿಗಾಗಿ "ನೇತಾಜಿ ಜಂಕ್ಷನ್‌" ನಾಮಫಲಕ ಅನಾವರಣ

ನೇತಾಜಿ ಅವರ ಸವಿನೆನಪಿಗಾಗಿ "ನೇತಾಜಿ ಜಂಕ್ಷನ್‌" ನಾಮಫಲಕ ಅನಾವರಣ

ಮಡಿಕೇರಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನಾಚರಣೆ ಅಂಗವಾಗಿ ಜನವರಿ 23  "ಪರಾಕ್ರಮ್ ದಿವಸ್‌" ದಂದು ನೇತಾಜಿ ಅವರ ಸವಿನೆನಪಿಗಾಗಿ ಮಡಿಕೇರಿ ನಗರದ ವಾರ್ಡ್ ನಂ.6 ರ ಸ್ಥಳೀಯ ರಾಘವೇಂದ್ರ ದೇವಾಲಯದ ಬಳಿ "ನೇತಾಜಿ ಜಂಕ್ಷನ್‌" ಎಂದು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣಗೊಳಿಸಲಾಯಿತು.

ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಮಡಿಕೇರಿ ನಗರಸಭಾ ಸದಸ್ಯರಾದ ಕೆ.ಎಸ್.‌ ರಮೇಶ್‌ ರವರು, ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರಾದ ಸುಭಾಷ್ ಚಂದ್ರ ಬೋಸ್ ರವರು ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿ ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಸುಭಾಷ್ ಚಂದ್ರ ಬೋಸ್ ಎಂಬ ಹೆಸರನ್ನು ನಾವು ಕೇಳಿದಾಗಲೆಲ್ಲಾ, ನಮ್ಮ ಮನಸ್ಸಿನಲ್ಲಿ ಬರುವ ಮೊದಲ ವಿಷಯವೆಂದರೆ ಅವರ ಜನಪ್ರಿಯ ಮಾತು “ತುಮ್ ಮುಜೆ ಖೂನ್ ದೋ ಮೈನ್ ತುಮ್ಹೆ ಆಜಾದಿ ದುಂಗಾ” (ನೀವು ನನಗೆ ರಕ್ತಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತೇನೆ). ನೇತಾಜಿ ಎಂದೇ ಖ್ಯಾತರಾಗಿದ್ದ ಸುಭಾಷ್ ಚಂದ್ರ ಬೋಸ್ ಅವರು ಮಹಾನ್ ಉಗ್ರ, ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶಭಕ್ತರಾಗಿದ್ದರು. ಸ್ವತಂತ್ರ ಭಾರತದ ಕಲ್ಪನೆಗೆ ಬದ್ಧತೆಯಿಂದ ಅವರು ತೆಗೆದುಕೊಂಡ ಧೈರ್ಯಶಾಲಿ ನಿರ್ಧಾರಗಳು ಅವರನ್ನು ಖ್ಯಾತರನ್ನಾಗಿ ಮಾಡಿವೆ. ಅವರ ಆದರ್ಶಗಳು ಮತ್ತು ತ್ಯಾಗ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುತ್ತವೆ ಎಂದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವಾದ ಇಂದು ಅವರಿಗೆ ಕೃತಜ್ಞತೆಯಿಂದ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರ ಸವಿನೆನಪಿಗಾಗಿ ಮಡಿಕೇರಿ ನಗರದ ವಾರ್ಡ್ ನಂ.6 ರ ಸ್ಥಳೀಯ ರಾಘವೇಂದ್ರ ದೇವಾಲಯದ ಬಳಿ "ನೇತಾಜಿ ಜಂಕ್ಷನ್‌" ಎಂದು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣಗೊಳಿಸಲಾಗಿದೆ ಎಂದು ಕೆ.ಎಸ್.‌ ರಮೇಶ್‌ರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ಪಿ.ಎಂ. ರವಿ, ಉದ್ಯಮಿ ಹರೀಶ್‌ ರೈ, ಜನನಿ ಮಹಿಳಾ ಮಂಡಳಿ(ರಿ) ಇದರ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರುಗಳು, ಸದಸ್ಯರು, ಶ್ರೀ ರಕ್ಷಾ ಪ್ರಗತಿಬಂಧು ಸದಸ್ಯರು, ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.