Header Ads Widget

Responsive Advertisement

ಕಾಂತೂರು-ಮೂರ್ನಾಡಿನಲ್ಲಿ ಜೈ ಭೀಮ್ ಯುವಕ ಸಂಘ ರಚನೆ

ಮೂರ್ನಾಡು: ಕಾಂತೂರು-ಮೂರ್ನಾಡಿನಲ್ಲಿ ನೂತನವಾಗಿ ರಚಿಸಲಾಗಿರುವ ಜೈ ಭೀಮ್ ಯುವಕ ಸಂಘದ ಅಧ್ಯಕ್ಷರಾಗಿ ಎಚ್.ಎಸ್. ಹೀರಾ ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ಎಚ್.ಬಿ. ಮಂಜು ಆಯ್ಕೆಯಾಗಿದ್ದು, 30 ಜನ ಯುವಕ ಸಂಘದ ಸದಸ್ಯರಾಗಿರುತ್ತಾರೆ.

ಇದೆ ಸಂದರ್ಭದಲ್ಲಿ ಮೂರ್ನಾಡಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ಜೈ ಭೀಮ್ ಯುವಕ ಸಂಘದ ಕಚೇರಿಯನ್ನು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ ನಂದಕುಮಾರ್ ಉದ್ಘಾಟಿಸಿದರು. ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಜನಾಂಗವು ಒಗ್ಗಟ್ಟಿನಿಂದ ಮುಂದುವರೆದಾಗ ಮಾತ್ರ ನಮ್ಮಲ್ಲಿ ಅಭಿವೃದ್ದಿ ಕಾಣಲು ಸಾಧ್ಯ. ಸರ್ಕಾರದ ಅನೇಕ ಸೌ¯ಭ್ಯಗಳು ತಾನಾಗಿ ಸಿಗುವಂತಾಗುತ್ತದೆ. ಸಂಘದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಹೇಳಿದರು.

ಸಮಾರಂಭದಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಿಕೇರಿಯ ದೇವರಾಜ್ ಮಣಿ, ಶಿಕ್ಷಕ ಎಚ್.ಎಲ್. ಭೈರ, ಕಂತೂರು-ಮೂರ್ನಾಡು ಅಭಿವೃದ್ದಿ ಅಧಿಕಾರಿ ಚಂದ್ರಮೌಳಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಾಪು ಸಣ್ಣಯ್ಯ ಮತ್ತು ಹೆಚ್.ಪಿ ಸುಬ್ರಮಣಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಎಚ್.ಎಸ್. ಹೀರಾ ಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ರಘು ಸ್ವಾಗತಿಸಿ, ದಿನೇಶ್ ವಂದಿಸಿದರು.

ಚಿತ್ರ ಮತ್ತು ವರದಿ: ಟಿ.ಸಿ. ನಾಗರಾಜ್, ಮೂರ್ನಾಡು