ಕಡಂಗ ಪಟ್ಟಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಹಾತ್ಮರ ಜೀವನದ ಕುರಿತು ಪಂಚಾಯಿತಿ ಸದಸ್ಯರು ಮಾತನಾಡಿದರು.
ಈ ಸಂದರ್ಭದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರಾದ ಕೋಡಿರ ವಿನೋದ್ ನಾಣಯ್ಯ, ಪಂಚಾಯಿತಿ ಸದಸ್ಯರಾದ ಸುಬೀರ್ ಸಿ ಇ, ಪಾಡಂಡ ರಾಣಿ ಗಣಪತಿ, ಪಿಡಿಒ ಆಶಾಕುಮಾರಿ, ಆಟೋ ಚಾಲಕರ ಸಂಘದ ಅಧ್ಯಕ್ಷ ರಾದ ಸುಗುಣ, ಜಕರಿಯ, ಮಂಜು, ಅಶೋಕ, ಸಿದ್ದಿಕ್ ಹಾಗೂ ಆಟೋ ಚಾಲಕರು, ವರ್ತಕರು ಗ್ರಾಮಸ್ಥರು ಕೈ ಜೋಡಿಸಿದರು
ವರದಿ: ನೌಫಲ್ ಕಡಂಗ